ಸೋಮವಾರ, ಜೂನ್ 17, 2024

ಅವಳು …. ಸ್ತ್ರೀ ಸಂವೇದಿ ಮಾತು-ಕತೆಗಳು

 ಅವಳು …. ಸ್ತ್ರೀ ಸಂವೇದಿ ಮಾತು-ಕತೆಗಳು 

ಕನ್ನಡ ಸಾಹಿತ್ಯ ರಂಗ (ಅಮೇರಿಕ) ಇತ್ತೀಚಿಗೆ ಮೇರಿಲ್ಯಾಂಡ್ ನಲ್ಲಿ ೧೧ನೇ ವಸಂತೋತ್ಸವ ಸಮಾರಂಭ ಆಚರಿಸಿತು.  ಅಂದು ಬಿಡುಗಡೆ ಮಾಡಿದ ಪುಸ್ತಕ “ಅವಳು …. ಸ್ತ್ರೀ ಸಂವೇದಿ ಮಾತು-ಕತೆಗಳು.” ಪುಸ್ತಕದ ಬಗ್ಗೆ ರಾಜೇಂದ್ರ ಚೆನ್ನಿ ಅವರ ಮುನ್ನುಡಿಯಿಂದಲೇ ಹೇಳಬೇಕೆಂದರೆ “ಇಲ್ಲಿಯ ಕತೆ/ಲೇಖನಗಳು  ಒಂದು ಹೊಸ ಮನ್ವಂತರದ ಸೂಕ್ಷ್ಮ ದಾಖಲೆಗಳಾಗಿವೆ.  ಸೈದ್ಧಾಂತಿಕ ಭರಾಟೆ ಹಠಮಾರಿತನವಿಲ್ಲದೆಯೆ ಪುರುಷಪ್ರಾಧಾನ್ಯದ ಅನೇಕ ಮುಖಗಳನ್ನು ತೆರೆದಿಡುತ್ತವೆ.”  ಈ ಪುಸ್ತಕದಲ್ಲಿ ನನ್ನ ಒಂದು ಲೇಖನವೂ ಪ್ರಕಟವಾಗಿದೆ.  ಬಿಡುವು ಮಾಡಿಕೊಂಡು ಇಡೀ ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ನನ್ನ ಲೇಖನ “ಶೋಷಿತ ಹೆಣ್ಣಿನ ಪುನಃಶ್ಚೇತನ: ಸವಾಲುಗಳ ಅವಲೋಕನ,” ದರೋಡೆಕೋರರ ರಾಣಿ ಎಂದೇ ಪ್ರಸಿದ್ಧಿ ಪಡೆದ ಫುಲನ್ ದೇವಿಯ ಜೀವನ ಚರಿತ್ರೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಬರೆದ ಲೇಖನ. ಅವಳು ಜನಿಸಿದ್ದೇ ಬಡತನದಲ್ಲಿ. ಹಿಂದೂ ಸಮಾಜದ ಅಸ್ಪೃಶ್ಯತೆಯ ತುಚ್ಛ, ನಿರ್ಗತಿಕ ಸಂಸಾರದಲಿ.  ಸಹಿಸಲಾರದ ಅತ್ಯಾಚಾರ, ದೌರ್ಜನ್ಯ, ಅಸಾಹಾಯಕತೆಯಲ್ಲೂ ಸಮಾಜದ ವಿರುದ್ಧ ಬಂಡೆದ್ದು ದುಷ್ಕೃತ್ಯ ಮಾಡಿದವರನ್ನು ತಾನೇ ಕೊಂದು ಸೇಡು ತೀರಿಸಿಕೊಂಡ ದಲಿತ ಹೆಣ್ಣು.  ನ್ಯಾಯಕ್ಕೆ ತಲೆಬಗ್ಗಿ ಶರಾಣಾಗತಿಯಲಿ ಕಠಿಣ ಕಾರಾಗೃಹವನು ಅನುಭವಿಸಿದ ಧೀರ ಮಹಿಳೆ.  ತನ್ನ ಮೂವತ್ತೆಳೇ ವರ್ಷಗಳ ಜೀವನದಲ್ಲಿ ಶೋಷಿತ ಹೆಣ್ಣಿನ ಸ್ಥಾನದಿಂದ ಅಂತ್ಯ ಪಡೆದು ಪುನಃಸ್ಚೇತನ ಗಳಿಸಿ ಶೋಷಿತ ಜನರ ಪ್ರತಿನಿಧಿಯಾಗಿ ರಾಜಕೀಯದಲ್ಲಿ ಮೆರೆದ ದಿಟ್ಟ ಹೆಣ್ಣು. ದುರಾದೃಷ್ಟಾವಶಾತ್ ಮೇಲ್ಜಾತಿಯ ದ್ವೇಷ ಅಭಿಯಾನದ ಗುಂಡಿಗೆ ಬಲಿಯಾದ ಅಭಾಗ್ಯ ಹೆಣ್ಣು. ನಾನು ಇಲ್ಲಿ ಅವಳ ವ್ಯಕ್ತಿ ಚಿತ್ರಣವನ್ನೇ ನಿಮ್ಮ ಮುಂದಿಡುವುದರ ಜೊತೆಗೆ ಯಾವ ಹಂತದಲ್ಲಿ ಮತ್ತು ಹೇಗೆ ಅವಳು ತನ್ನ ಶೋಷಿತ ಸ್ಥಿತಿಯಿಂದ ಹೊರಬಂದು ಪುನಃಸ್ಚೇತನ ಗಳಿಸಿದಳು, ಆ ಪ್ರಕ್ರಿಯೆಯಲ್ಲಿ ಯಾವ ಸವಾಲುಗಳು ಉದ್ಭವಿಸುತ್ತವೆ ಎನ್ನುವುದರ ಅವಲೋಕನವನ್ನೇ ಈ ಲೇಖನದ ಗುರಿ ಮಾಡಿಕೊಂಡಿದ್ದೇನೆ. ಫೂಲನ್ ದೇವಿಯು ಹೇಗೆ ಜಾತಿಯ ಕಳಂಕ,  ಆರ್ಥಿಕ ಶೋಷಣೆ ಮತ್ತು ಲಿಂಗ ಬೇಧಗಳನ್ನು ಸ್ಪಂದಿಸುವುದರ ಜೊತೆಗೆ ತನ್ನದೇ ಪ್ರತಿರೋಧಕ ಸಿದ್ಧಾಂತಗಳನ್ನು ಅಳವಡಿಸಿಕೊಂಡಳು ಎಂದು ಅವಲೋಕಿಸುವ ಪ್ರಯತ್ನವನ್ನು ಕೂಡ ಮಾಡಿದ್ದೇನೆ.

ಲೇಖನ ಇದೆ ಬ್ಲಾಗಿನಲ್ಲಿ ಕೂಡ ಪೋಸ್ಟ್ ಮಾಡಿದ್ದೇನೆ.  ಇಲ್ಲಿದೆ ಅದರ ಕೊಂಡಿ.  ಓದಿ ನಿಮ್ಮ ಅಭಿಪ್ರಾಯ ತಿಳಿಸಿ.


ಪ್ರಕಟಿತ ಕೃತಿಗಳು (nothingmuchdoc.blogspot.com)















>ಅವಳು …. ಸ್ತ್ರೀ ಸಂವೇದಿ ಮಾತು-ಕತೆಗಳು 

ಸಂಪಾದಕರು: ಮೀರಾ.ಪಿ.ಆರ್. ಮತ್ತು ಪೂರ್ಣಿಮ ಕಶ್ಯಪ್ 

ಪ್ರಕಾಶಕರು: ಅಭಿನವ, ಬೆಂಗಳೂರು 

ಬೆಲೆ: ೫೦೦ ರೂಪಾಯಿಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ